ಇಂತಿ ನಿಮ್ಮ ನೆನಪಿನ

ಕ್ವಿಂವ್ ಕ್ವೀವ್ …. ಆಗೆಲ್ಲಾ ನಾ ಎಸ್ಟು ಚೆನ್ನಾಗಿ ಕೊಗುತಾಯಿದ್ದೆ, ಎಸ್ಟು ಬಿಂದಾಸಗಿತ್ತು ಬದುಕು, ಶಾಲೆಯಲ್ಲಿ ಮತ್ತು ಮನೆಗಳ ಹೆಂಚಿನ ಸಂದಿಯಲೆಲ್ಲಾ ನಾ ಗೂಡು ಕಟ್ಟುತಾಯಿದ್ದೆ, ಅಂತು ನಮ್ಮದು ಒಂದು ಹ್ಯಾಪಿ ಪ್ಯಾಮಿಲಿಯಾಗಿತ್ತು, ನಾ ಒಂದು ವಿಷಯ ಹೇಳಲೆ ಬೇಕು, ನೆನಸಿಕೊಂಡರೆ ಈಗಲು ನಗು ಬರುತೆ, ನನಗೆ ಇಬ್ಬರು ಮಕ್ಕಳು,  ಅಶು ಮತ್ತು ಚಿಂಟು, ಪ್ಯಾಮಿಲಿ ಪ್ಲಾನಿಂಗ್ ಯೋಜನೆರಿ ಅದಕ್ಕೆ ಇಬ್ಬರು, ನಮ್ಮ ಚಿಂಟು ಬಾಳ ತುಂಟ, ನಮ್ಮ ಗೊಡು ಇದ್ದಿದ್ದು ಸರ್ಕಾರಿ ಸ್ಕೊಲಲ್ಲಿ, ಚಿಂಟು ಮಕ್ಕಳ ತಲೆ ಮೇಲೆ ಕಸರೆ ಮಾಡಿಬಿಡುತಿದ್ದ, ನಾ ಎಸ್ಟು ಹೇಳಿದರು ಕೇಳುತಿರಲಿಲ್ಲ, ಮತೆ ನಮ್ಮ ಅಶುಗೆ ಹೇಮಂತನನ್ನು ಕಂಡರೆ ತುಂಬ ಇಸ್ಟ, ಆಗಿನ್ನು ಅವನು ಎಂಟನೆ  ತರಗತಿಯಲ್ಲಿ ಒದುತಾಯಿದ್ದ, ಸೊ ನಾವು ಅ ಎಂಟನೆ ತರಗತಿ ರೊಮಲ್ಲೆ ಗೊಡು ಕಟ್ಟಿದ್ದೆವು, ಅವನು ಒಂಬತ್ತನೆ ತರಗತಿಗೆ ಹೋದಾಗ ನಮ್ಮ ಅಶು ಹಟ ಹಿಡಿದು ಗೊಡನ್ನು ಆ ರೊಮಿಗೆ ಬದಲಾಯಿಸಿದಳು, ನನಗಂತು ಗೊಡು ಬದಲಾಯಿಸೋದು ಅಂದರೆ ತಲೆ ನೋವಿನ ವಿಷಯ, ಅದರೆ ನಾ ಅಶುನ ತುಂಬ ಪ್ರೀತಿಸುತೆನೆ, ಸೊ ಅವಳಿಗಾಗಿ ಗೊಡನ್ನು ಬದಲಾಯಿಸುವದು ಅನಿರ್ವಾಯವಾಗಿತ್ತು, ಹೇಮಂತ್ ಆ ಊರಿನ ಸ್ರೀಮಂತರ ಮಗ, ಅವನು ಪ್ರತಿ ದಿನ ಆಶುಗೆ  ತಿಂಡಿಯನ್ನು ಕೊಟ್ಟೆ ತಿನ್ನುತಾಯಿದಿದ್ದು, ಅವನು ಸ್ಕೂಲ್ ಗೆ ಬರಲಿಲ್ಲ ಅಂದರು ಅಶುಗೆ ತಿಂಡಿ ಕೊಡಲು ಮರೆಯದೆ ಬರುತಾಯಿದ್ದ, ಅವಳು ಸಹ ಅವನಿಗಾಗಿ ಪ್ರತಿ ದಿನ ಕಾಯುತ ಕೊರುತಿದ್ದಳು, ಅವನು ಬರಲಿಲ್ಲಾ ಅಂದರೆ ಅವತ್ತು ಅವಳು ಎನು ಮಾಡಿದರು ಊಟ ಮಾಡುತಿರಲಿಲ್ಲ, ಹೀಗೆ ಬದುಕು ಹ್ಯಾಪಿಯಾಗಿ ಸಾಗುತಯಿತ್ತು, ಹೇಮಂತ್ ಕಾಲೇಜ್ ಸೇರಿದ, ನಮ್ಮ ಗೊಡು ಹಾಗೆ ನಾವು ಸಹ ಕಾಲೇಜ್ ಸೇರಿದೆವು, ಅದೊಂದು ದುರಂತ ಕಥೆ….! ಆ ಪುಟ್ಟ ಹೃದಯ ಕನಸುಗಳಿಗೆ ಬಲಿಯಾದ ದುರಂತ ಕಥೆ, ಕಾಲೇಜ್ ಸೇರಿದ ಕೆಲವೆ ದಿನಗಳಲ್ಲಿ ನಮ್ಮ ಅಶು…. ನನ್ನ ಪ್ರೀತಿಯ ಅಶು ನಮ್ಮಿಂದ ದೊರಾದಳು, ಆ ದಿನ ಎನಾಯಿತು ಅಂದರೆ ಇದ್ದಕಿದ್ದಂತೆ ಕ್ವಿಂವ್ ಕ್ವೀವ್ ….ಅನ್ನುವ ದನಿ ಕೇಳಿಸಿತು, ನನಗಂತು ನಂಬಲು ಅಗಲೆ ಇಲ್ಲ, ಅಶು ಹೇಳಿದಳು ಅದು ಮೊಬ್ಯಲ್ ಅಂತೆ ಹೇಗೆ ಬೇಕಾದರು ಮಾತಡುತ್ತಂತೆ, ಅದನ್ನು ಹೇಮಂತ್ ಹೊಸದಾಗಿ ಕೊಂಡುಕೊಂಡ್ಡಿದ್ದ, ಅಶು ನನಗು ಒಂದು ಮೊಬ್ಯಲು ಬೇಕು ಅಂತ ಹಟ ಹಿಡಿದಳು, ನನ್ನ ದುರಾದೃಸ್ಟ ನನ್ನಿಂದ ಅದು ಸಾಧ್ಯವಾಗಲಿಲ್ಲ ಮತ್ತು ಅಶು ಮನೆ ಬಿಟ್ಟು ಹೊರಟು ಹೋದಳು, ಆ ದಿನದಿಂದ ನಾ ಗೊಡು ಬಿಟ್ಟು ಹೊರಬರುವದನ್ನು ನಿಲ್ಲಿಸಿ ಬಿಟ್ಟೆ, ಚಿಂಟು ಹೇಳಿದ ಅಶು ಈಗ ಹೇಮಂತ್ ಮನೆಯಲ್ಲೆ ಗೊಡು ಕಟ್ಟಿದ್ದಾಳಂತೆ ಮತ್ತು ಇನ್ನು ಕೆಲವೆ ದಿನಗಳಲ್ಲಿ ತಾಯಿಯಾಗುತಿದ್ದಾಳಂತೆ, ನಾ ಕಣ್ ಮುಚ್ಚಿ ಅಳುತ ಇದ್ದೆ, ನನಗೆ ಅಶುನ ನೋಡ ಬೇಕು ಅನಿಸುತೆ ಅದರೆ ನಾ …., ಸಾವಿನ ದಿನಗಳನ್ನು ಎಣಿಸುತ್ತಾಯಿದ್ದೆನೆ ಮತ್ತು ಸಾವಿಗಾಗಿ ಕಾಯುತಿದ್ದೆನೆ, ಆ ದಿನ ಇನ್ನು ನೆನಪಿದೆ ಅದು ನನ್ನ ಬದುಕಿನ ಕೊನೆಯ ದಿನ….! ಅವತ್ತು ಆಶು ಹುಟ್ಟಿದ ದಿನ, ಕಾಲೇಜಲ್ಲಿ ಮೇಸ್ಟ್ರು ಪಾಟ ಮಾಡುತಿದ್ದರು, ಅದೆ ಮೊಬ್ಯಲ್ ಬಗ್ಗೆ ನನ್ನ ಕಿವಿ ಚುರುಕಾಯಿತು, “ಮೊಬ್ಯಲಿಂದ ಬರುವ ಕಿರಣಗಳಿಂದ ಹೃದಯಕ್ಕೆ ತೊಂದರೆಯಗುತ್ತೆ ಮತ್ತು ಇ ಕಿರಣಗಳು ಪ್ರಾಣಕ್ಕೆ ಅಪಾಯವನ್ನು ತರುತ್ತವೆ” ನನಗೆ ಅಸ್ಟೆ ಕೇಳಿಸಿದ್ದು ನನ್ನ ಹೃದಯ ಒಂದುಕ್ಷಣ ನಿಂತಿ ಹೋಗಿತ್ತು, ಅದನ್ನು ಉಹಿಸಿಕೊಂಡರು ಭಯವಗುತ್ತೆ ಅಶು……… ನಾ ಅಶುನ ಕೊಗುತ್ತಾ ಹೇಮಂತ್ ಮನೆ ಕಡೆ ಹೊರಟೆ, ಅದರೆ ಅದು ತುಂಬ, ತುಂಬ ಲೇಟ್ ಅಗಿತ್ತು. ಮತ್ತು ಅಶು ಸತ್ತು ಹೋಗಿದ್ದಳು. ನಾ ಅಲ್ಲಿ ಹೋದಾಗ ಹೇಮಂತ್ ಅಶುನ ಮನೆಯಿಂದ ಹೊರಗೆ ಎಸೆಯುತಿದ್ದ, ನಾ ಅಶುನ ಮರಿಗಳಿಗಾಗಿ ಗೊಡಿನ ಹತ್ತಿರ ಹೊದೆ, ಓ ಗಾಡ್ ದಯವಿಟ್ಟು ನನ್ನನ್ನು ಕೊಂದು ಬಿಡು, ಅಶು ಸತ್ತು ಅಗಲೇ ತುಂಬ ದಿನ ಅಗಿತ್ತು ಅನಿಸುತೆ, ಅಲ್ಲಿದ್ದ ಎರಡು ಮರಿಗಳು ಹಸಿವೆಯಿಂದ ಸಾಯುತ್ತಿದ್ದವು ಮತ್ತು ನನ್ನನ್ನು ನೋಡಿ ಊಟಕ್ಕಾಗಿ ಬಾಯಿತೆರೆಯುತ್ತಿದ್ದವು ಅವುಗಳಿಗೆ ಕೊಗಲು ಸಹ ಶಕ್ತಿ ಇರಲಿಲ್ಲ,  ಓ ಗಾಡ್ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು….! ನಾ ಆಗಲೇ ಸತ್ತು ಕೆಳಕ್ಕೆ ಬಿದ್ದೆ, ಹೇಮಂತ್ ನನ್ನನ್ನು ಸಹ ತಂದು ಹೊರಗೆಸೆದ, ಅದರೆ ಆ ಮೊಬ್ಯಲ್ ಮಾತ್ರ ತನ್ನ ಪಾಡಿಗೆ ತಾನು ಕ್ವಿಂವ್ ಕ್ವೀವ್ …. ಅಂತ ಕೊಗುತಿತ್ತು.      

                                                                          - ಇಂತಿ ನಿಮ್ಮ ನೆನಪಿನ

                                                                                 ಗುಬ್ಬಿ(ಗುಬ್ಬಚ್ಚಿ)

Published in: on March 29, 2009 at 3:30p03  Leave a Comment  

The URI to TrackBack this entry is: http://akshara4u.wordpress.com/2009/03/29/%e0%b2%87%e0%b2%82%e0%b2%a4%e0%b2%bf-%e0%b2%a8%e0%b2%bf%e0%b2%ae%e0%b3%8d%e0%b2%ae-%e0%b2%a8%e0%b3%86%e0%b2%a8%e0%b2%aa%e0%b2%bf%e0%b2%a8/trackback/

RSS feed for comments on this post.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.